Sunday, January 3, 2010

೩ ಈಡಿಯಟ್ಸ್ ವಿವಾದ






ಅದು ನನ್ನದೇ ಕತೆ ಅನ್ನೋದು ಚೇತನ್ ಭಗತ್ ಉವಾಚ. ಹಾಗೇನಿಲ್ಲ ಅದು ನನ್ನ ಸ್ವಂತ ಕತೆ ಅಂತಾರೆ ಕತೆಗಾರ ಅಭಿಜಿತ್ ಜೋಶಿ. ಮಾಧ್ಯಮದವರು ಬಾಯ್ಮುಚ್ಚಿ ಎನ್ನುವುದು ವಿಧು ವಿನೋದ್ ಚೋಪ್ರಾ ಫರ್ಮಾನು. ವಾರವೊಂದರಲ್ಲಿ ೧೮೦ ಕೋಟಿ ರೂ. ಗಳಿಸಿ ವರ್ಷದ ಕೊನೆಯ ಹಿಟ್ ಚಿತ್ರವೆಂಬ ಹಣೆಪಟ್ಟಿ ಅಂಟಿಸಿಕೊಳ್ಳುತ್ತಿರುವ೩ ಈಡಿಯಟ್ಸ್ ಚಿತ್ರದ ತಾಜಾ ವಿವಾದವಿದು.
ಫೈವ್ ಪಾಯಿಂಟ್ ಸಮ್ ವನ್ ಕಾದಂಬರಿ ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ ಎನ್ನುವುದಂತೂ ಪುಸ್ತಕ ಪ್ರಿಯರಿಗೆ ಚೆನ್ನಾಗಿ ಗೊತ್ತು. ಚಿತ್ರದ ಸಣ್ಣ, ಪುಟ್ಟ ಬದಲಾವಣೆ ಹೊರತುಪಡಿಸಿದರೆ ಪಾತ್ರಧಾರಿಗಳೂ ಸೇರಿದಂತೆ ಚಿತ್ರದ ಲೋಕೇಶನ್ ಸಹ ಫೈವ್...ನಂತಿವೆ. ನನ್ನ ಕಾದಂಬರಿಯನ್ನೇ ಭಟ್ಟಿ ಇಳಿಸಿ ನನಗೆ ಕ್ರೆಡಿಟ್ ಕೊಡದಿದ್ದರೆ ಹೇಗೆ ಎನ್ನುವುದು ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಪ್ರಶ್ನೆ. ಚಿತ್ರ ನಿರ್ಮಾಣ ಹಂತದಲ್ಲಿದ್ದಾಗ ಇದು ನನ್ನ ಕಾದಂಬರಿ ಆಧಾರಿತ ಎಂಬುದು ಗೊತ್ತಾಗಿತ್ತು. ನನಗೂ ಟೈಟಲ್ ಕಾರ್ಡ್‌ನಲ್ಲಿ ಕ್ರೆಡಿಟ್ ಕೊಡಬಹುದು ಎಂದುಕೊಂಡಿದ್ದೆ. ಆದರೆ ಸಿನಿಮಾದ ಮಂದಿ ನನ್ನ ಹೆಸರು ಕಾದಂಬರಿಯನ್ನೂ ಮರೆತಿದ್ದಾರೆ. ಅಪಾರ ಅಭಿಮಾನಿಗಳು ಈ ಬಗ್ಗೆ ನನ್ನನ್ನು ಪ್ರಶ್ನಿಸುತ್ತಿದ್ದಾರೆ, ನಾನೇನು ಉತ್ತರ ಕೊಡಲಿ ?. ಚಿತ್ರ ಬಿಡುಗಡೆಗೂ ಮುನ್ನ ನನ್ನನ್ನು ಕರೆದ ವಿಧು ವಿನೋದ್ ಚೋಪ್ರಾ ನಾವು ಸ್ನೇಹಿತರಾಗಿರೋಣ ಎಂದೆಲ್ಲ ಹೇಳಿದ್ದರು. ಈಗ ಅನಾಗರಿಕ ವರ್ತನೆ ಮಾಡುತ್ತಿದ್ದಾರೆ ಎಂಬುದು ಚೇತನ್ ಆರೋಪ.
ಆದರೆ ಚಿತ್ರದ ನಿರ್ಮಾಪಕ ವಿಧು ಹೇಳೋದೇ ಬೇರೆ. ಚಿತ್ರದ ಕತೆ ಅಭಿಜಿತ್ ಜೋಶಿಯದ್ದು. ಫೈವ್...ಗೂ ಇದಕ್ಕೂ ಸಂಬಂಧವಿಲ್ಲ. ಚಿತ್ರ ಕಾದಂಬರಿಗೆ ಹೋಲಿಕೆಯಾದರೆ ನಾವೇನೂ ಮಾಡುವಂತಿಲ್ಲ. ಚೇತನ್ ಪ್ರಚಾರಕ್ಕಾಗಿ ಇಂತಹ ಕೀಳುಮಟ್ಟದ ವಿವಾದ ಹುಟ್ಟುಹಾಕಿದ್ದಾರೆ ಎನ್ನುತ್ತಾರೆ. ಅಂದ ಹಾಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದ ವಿಧು ಬಾಯ್ಮುಚ್ಚಿ ಎಂದು ಗದರಿದ್ದರು. ನಂತರ ಕ್ಷಮೆಯನ್ನೂ ಯಾಚಿಸಿದ್ದಾರೆ. ಕತೆ ಬರೆದ ಅಭಿಜಿತ್ ಜೋಶಿ ಇದು ಸ್ವಂತ ಕತೆ ಎಂದೂ ಸಮರ್ಥಿಸಿಕೊಂಡಿದ್ದಾರೆ.
ಆದರೆ ಈ ಮೂವರ ಹೇಳಿಕೆಗಳ ಮಧ್ಯೆ ಪ್ರಶ್ನೆಯೊಂದು ಉದ್ಭವಿಸುತ್ತದೆ. ಚೇತನ್‌ರಂತಹ ಪ್ರಖ್ಯಾತ ಕಾದಂಬರಿಕಾರ ತನ್ನ ಕಾದಂಬರಿಯನ್ನೇ ಚಿತ್ರವಾಗಿಸಿಕೊಂಡವರ ವಿರುದ್ಧ ಮೊದಲೇ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ?. ಚಿತ್ರ ಬಿಡುಗಡೆಯಾಗಿ ಹಿಟ್ ಆದ ನಂತರ ಯಾಕೆ ಆಕ್ರೋಶ ಬಂತು ? ಅಷ್ಟಕ್ಕೂ ಫೈವ್...ಚಿತ್ರವಾಗುತ್ತಿರುವ ಬಗ್ಗೆ ತಮ್ಮ ಬ್ಲಾಗ್‌ನಲ್ಲೇ ಚೇತನ್ ಬರೆದುಕೊಂಡಿದ್ದರು. ಚಿತ್ರ ಬಿಡುಗಡೆಯಾಗುವವರೆಗೂ ಯಾಕೆ ಸುಮ್ಮನೆ ಕುಳಿತರು ? ನ್ಯಾಯಾಲಯಕ್ಕೆ ಯಾಕೆ ಮೊರೆ ಹೋಗಲಿಲ್ಲ ? ಎಂಬ ಪ್ರಶ್ನೆಗಳು, ಪ್ರಶ್ನೆಗಳಾಗಿಯೇ ಉಳಿದಿವೆ. ವಿಧು ಕೂಡ ಇನ್ನು ಮುಂದೆ ಚೇತನ್‌ರನ್ನು ಭೇಟಿಯಾಗುವುದಿಲ್ಲ ಎಂಬ ಶಪಥವನ್ನೂ ಮಾಡಿದ್ದಾರೆ. ಹಣ, ಖ್ಯಾತಿ, ಹೆಸರು ಮೂರು ಇರುವ ಈ ಕಾದಂಬರಿಕಾರ, ಆ ಖ್ಯಾತ ನಿರ್ಮಾಪಕ ಹಾಗೂ ಸಂಭಾಷಣೆಕಾರರ ಮಧ್ಯೆ ಜಗಳ ಯಾಕಾಗಿದೆ ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಎಂಬುದು ಚಿತ್ರಪ್ರೇಮಿಗಳ ಪ್ರಶ್ನೆ. ಈ ವಿವಾದದಿಂದ ೩ ಈಡಿಯಟ್ಸ್ ಚಿತ್ರ ನೋಡುವ, ಫೈವ್...ಕಾದಂಬರಿ ಓದುವವರ ಸಂಖ್ಯೆ ಹೆಚ್ಚಾಗಲಿದೆ ಎಂಬುದಂತೂ ಸತ್ಯ. ಅಂದ ಹಾಗೆ ಮೂವರು ಮೂರ್ಖರು ಯಾರು ?


Friday, January 1, 2010

ಸಾಂಗತ್ಯಕ್ಕಿಗ ಒಂದು ವರ್ಷ !


ಗೆಳೆಯರೇ,
ಸಾಂಗತ್ಯ (ಜ.2) ಒಂದು ವರ್ಷಕ್ಕೆ ಕಾಲಿಡುತ್ತದೆ. ಈ ಸಂದರ್ಭದಲ್ಲಿ ಜನವರಿ 16, 17 ರಂದು ಕುಪ್ಪಳ್ಲಿಯಲ್ಲಿ ಮೂರನೇ ಚಿತ್ರೋತ್ಸವ ಹಮ್ಮಿಕೊಂಡಿದೆ. ಚಲನಚಿತ್ರಗಳ ಪ್ರದರ್ಶನ, ಚರ್ಚೆ, ಸಂವಾದವೆಲ್ಲವನ್ನೂ ಆಯೋಜಿಸಲಾಗುತ್ತದೆ. ಇದಕ್ಕೆ ಬರುವವರು ಮೊದಲೇ ತಿಳಿಸಬೇಕು.


ಮುನ್ನೂರು ರೂ. ಪ್ರವೇಶ ಶುಲ್ಕವಿದ್ದು, ಊಟ, ವಸತಿ ಎಲ್ಲವನ್ನೂ ಒದಗಿಸಲಾಗುವುದು. ಚಿತ್ರೋತ್ಸವದ ಮೂಲಕವೇ ಸಿನಿಮಾ ಭಾಷೆಯನ್ನು ಅರಿತುಕೊಳ್ಳುವುದು, ಸಿನಿಮಾ ಪ್ರಶಂಸೆ ಮಾಡುವುದನ್ನು ರೂಢಿಸಿಕೊಳ್ಳುವುದು ಹೀಗೆ...ಹಲವು ಉದ್ದೇಶಗಳಿವೆ. ಈಗಾಗಲೇ ಎರಡು ಚಿತ್ರೋತ್ಸವಗಳು ಒಳ್ಳೆಯ ಅನುಭವವನ್ನು ಕಟ್ಟಿಕೊಟ್ಟಿದ್ದು, ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರಗಳ ಪ್ರದರ್ಶನ, ಅವುಗಳ ಕುರಿತ ಚರ್ಚೆ, ಸಿನಿಮಾ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಎಲ್ಲವೂ ಉತ್ಸವದಲ್ಲಿ ಒದಗಿಸಲಾಗುವುದು.

ಜನವರಿ 16 ರಂದು ಬೆಳಗ್ಗೆ 10 ಕ್ಕೆ ಉತ್ಸವ ಉದ್ಘಾಟನೆಗೊಳ್ಳಲಿದ್ದು, ನಂತರ ಸಾಕ್ಷ್ಯಚಿತ್ರಗಳನ್ನು ಒಳಗೊಂಡಂತೆ ಸುಮಾರು ಎಂಟು ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಜನವರಿ 17 ರ ಸಂಜೆ 5 ಕ್ಕೆ ಉತ್ಸವ ಸಮಾರೋಪಗೊಳ್ಳಲಿದೆ. ಉತ್ಸವಕ್ಕೆ ನಮ್ಮೊಂದಿಗೆ ಅನುಭವವನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರ ನಿರ್ದೇಶಕರನ್ನು ಸಂಪರ್ಕಿಸಲಾಗಿದೆ. ಸದ್ಯವೇ ಅವರಿಂದ ಪ್ರತಿಕ್ರಿಯೆ ಲಭ್ಯವಾಗಲಿದೆ.

ಉತ್ಸವಕ್ಕೆ ಸಂಬಂಧಿಸಿದಂತೆ ಏನಾದರೂ ಸಲಹೆಗಳಿದ್ದರೆ ಶೀಘ್ರವೇ ನಮಗೆ ಕಳುಹಿಸಬಹುದು. ನಮ್ಮ ಮೇಲ್ ವಿಳಾಸ saangatya@gmail.com .ಹಾಗೆಯೇ ಅತ್ಯುತ್ತಮ ಚಿತ್ರಗಳಿದ್ದರೆ ಅವುಗಳ ಹೆಸರನ್ನೂ ನಮಗೆ ಕಳುಹಿಸಬಹುದು. ದಯವಿಟ್ಟು ನಿಮ್ಮೆಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮ ನಿರೀಕ್ಷೆ.

ದಯವಿಟ್ಟು, ಬರುವವರು ಒಂದು ಇಮೇಲ್ ಮಾಡಿ. ಇಲ್ಲದಿದ್ದರೆ ಈ ಉತ್ಸವದ ಸಂಚಾಲಕರಾದ ನಿರಂಜನ್ ಕಗ್ಗೆರೆ 98808 33500, ಅಕ್ಷಯ್ ಹೆಗಡೆ-9481 09206, ಪ್ರವೀಣ್ ಹೆಗಡೆ - 98444 91532 ತಿಳಿಸಿ ಹೆಸರು ನೋಂದಾಯಿಸಬಹುದು.
ಧನ್ಯವಾದಗಳೊಂದಿಗೆ
ಸಾಂಗತ್ಯ

ವಿಷ್ಣುಗೆ ಅಮೀರ್ ಶ್ರದ್ಧಾಂಜಲಿ


ಖ್ಯಾತ ನಟ, ಸಾಹಸಸಿಂಹ ವಿಷ್ಣುವರ್ಧನ್ ನಿಧನ ಎಲ್ಲರನ್ನೂ ಕಂಗೆಡಿಸಿದೆ, ಇದಕ್ಕೆ ಬಾಲಿವುಡ್ ಕೂಡ ಹೊರತಲ್ಲ. ಇತ್ತೀಚಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಆಮೀರ್ ಖಾನ್ ಕೂಡ ವಿಷ್ಣು ನಿಧನಕ್ಕೆ ತಮ್ಮ ಬ್ಲಾಗ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಅದು ಹೀಗಿದೆ...
The 3i team is travelling to a number of cities to interact with audiences across the country. Bangalore was the first stop and we had such a lovely time there. The entire team joins me in thanking Bangalore, and all of you who were there at the mall, to give us so much love and affection. It was really overwhelming. Thank you.

The sad note in our happiness was the untimely demise the next day of super star Vishnuvardhan. Mr Vishnuvardhan who is a huge star in Karnataka and has had a prolific career was only 59. Our condolences to his family, to all those who love him, and to all of Karnatka for whom he is such an icon. May his soul rest in peace.